Slide
Slide
Slide
previous arrow
next arrow

ಟಿಎಸ್ಎಸ್ ಚುನಾವಣೆ; ಶುಕ್ರವಾರ ನಾಮಪತ್ರ ಸಲ್ಲಿಸಿದವರ ಯಾದಿ ಇಂತಿದೆ !

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ (ಟಿಎಸ್ಎಸ್) ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿಯ 2023-24 ರಿಂದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಆ.20 ರಂದು ನಡೆಯಲಿರುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಆ.11, ಶುಕ್ರವಾರದಂದು ಸಾಮಾನ್ಯ ವರ್ಗದಿಂದ ರಾಮಕೃಷ್ಣ ರಾಮಪ್ಪ ಹೆಗಡೆ ಐನಕೈ, ರಾಘವ ಸುಬ್ರಾಯ ಹೆಗಡೆ ಸಂಪಗೋಡ, ವಿನಾಯಕ ಶ್ರೀಪತಿ ಭಟ್ಟ ಸುಗಾವಿ, ಗಣಪತಿ ವೆಂಕಟ್ರಮಣ ಹೆಗಡೆ ಸೂಳಗಾರ, ಉಮೇಶ ಶ್ರೀಧರ ಹೆಗಡೆ ಲಕ್ಕಿಜಡ್ಡಿ, ಉಮಾನಂದ ಗೋವಿಂದ ಭಟ್ಟ ಕೊಡ್ಲಳ್ಳಿ, ನಾರಾಯಣ ನರಸಿಂಹ ಜೋಶಿ ಹೊಸಗದ್ದೆ, ಪರಮೇಶ್ವರ ವೆಂಕಟ್ರಮಣ ಹೆಗಡೆ ಹೊಸಗದ್ದೆ (ವಾಟೆಹಕ್ಲು), ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಬಾಲಚಂದ್ರ ಪ್ರಭಾಕರ ಹೆಗಡೆ ಕೋಡಮೂಡ, ರಾಮಕೃಷ್ಣ ತಿಮ್ಮಪ್ಪ ಹೆಗಡೆ ಅಳಗೋಡ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಕೃಷ್ಣ ಮಹಾಬಲೇಶ್ವರ ಹೆಗಡೆ ಅಬ್ರಿ ಹೀಪನಳ್ಳಿ, ಕೃಷ್ಣ ನಾರಾಯಣ ಭಟ್ಟ, ಓಣಿವಿಘ್ನೇಶ್ವರ, ಶಾಂತಾರಾಮ ಮಹಾಬಲೇಶ್ವರ ಹೆಗಡೆ ಹೀಪನಳ್ಳಿ, ಹಾಗೂ ಸಾಮಾನ್ಯ ಮಹಿಳೆ ವರ್ಗದಿಂದ ವರದಾ ರಾಮಕೃಷ್ಣ ಹೆಗಡೆ ಜಾಜೀಮನೆ ನಾಮಪತ್ರ ಸಲ್ಲಿಸಿದ್ದಾರೆ.

ಹಿಂದುಳಿದ ‘ಅ’ ವರ್ಗದಿಂದ ಅಣ್ಣಪ್ಪ ಗೋವಿಂದ ಗೌಡ ಹುಲ್ಕುತ್ರಿ, ಹಿಂದುಳಿದ ‘ಬ’ ವರ್ಗದಿಂದ ವಿರೇಂದ್ರ ಪುಟ್ಟಪ್ಪ ಗೌಡ‌ರ್ ತೋಟದಮನೆ, ಮಂಜುನಾಥ ಪುಟ್ಟಪ್ಪ ಗೌಡ‌ರ್ ತೋಟದಮನೆ, ಪ್ರವೀಣ ಶಿವಲಿಂಗ ಗೌಡ (ಪಾಟೀಲ) ತೆಪ್ಪಾರ, ನಾಮಪತ್ರ ಸಲ್ಲಿಸಿದ್ದು, ಸಹಕಾರಿ ಸಂಘ ವರ್ಗದಲ್ಲಿ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಯಿಂದ ಗಣಪತಿ ಶೇಷಗಿರಿ ರಾಯ್ಸದ್ ಕಲಸಳ್ಳಿ ನಾಮಪತ್ರ ಸಲ್ಲಿಸಿದ್ದಾರೆ.

ಆ.10 ಗುರುವಾರದಂದು ಸಾಮಾನ್ಯ ವರ್ಗದಿಂದ ದತ್ತಾತ್ರೇಯ ವೆಂಕಟ್ರಮಣ ಹೆಗಡೆ ಕೇರಿ ಗಡಿಗೆಹೊಳೆ, ಮಹಾದೇವ ವೆಂಕಟ್ರಮಣ ಹೆಗಡೆ ಕೇರಿ ಗಡಿಗೆಹೊಳೆ, ವಾಸುದೇವ ಅನಂತ ಹೆಗಡೆ ಕರ್ಕಿಸವಲ, ಮಹಾಬಲೇಶ್ವರ ಚಂದ್ರಶೇಖರ ಹೆಗಡೆ ಶಿರಸಿಮಕ್ಕಿ, ನರಸಿಂಹ ವೆಂಕಟ್ರಮಣ ಜೋಶಿ ಕೊಪ್ಪಲತೋಟ, ನಿರಂಜನ ಶ್ರೀಧರ ಭಟ್ಟ ಹೊಸ್ತೋಟ, ಶಶಿಧರ ಪುರಂದರ ಹೆಗಡೆ ಹಳದೋಟ, ಕೃಷ್ಣ ಗಣಪತಿ ಬೋಡೆ ದೋರಣಗಾರ, ನರಸಿಂಹ ತಿಮ್ಮಣ್ಣ ಭಟ್ಟ ಗುಂಡ್ಕಲ್, ರವೀಂದ್ರ ಜಯಪ್ರಕಾಶ ಹೆಗಡೆ ಹಿರೇಕೈ, ಮಂಜುನಾಥ ಶಿವರಾಮ ಹೆಗಡೆ ಐನಕೈ, ಅಶೋಕ ಗೌರೀಶ ಹೆಗಡೆ ಅಬ್ಬಿಗದ್ದೆ, ಸಂತೋಷ ವಿಶ್ವೇಶ್ವರ ಭಟ್ಟ ಹಳವಳ್ಳಿ, ಕೃಷ್ಣ ಗಣಪತಿ ಹೆಗಡೆ ಜೂಜಿನಬೈಲ್, ಗಣಪತಿ ಅಣ್ಣಯ್ಯ ಭಟ್ಟ ಕಲ್ಲೇಶ್ವರ, ವಸಂತ ಮಂಜುನಾಥ ಹೆಗಡೆ ಹಣಗಾರ, ಶ್ರೀಪತಿ ಮಂಜಪ್ಪ ಹೆಗಡೆ ಮಾನಿಮನೆ ಹಾಗೂ ಸಾಮಾನ್ಯ ಮಹಿಳೆ ವರ್ಗದಿಂದ ವೀಣಾ ಮಹಾಬಲೇಶ್ವರ ಹೆಗಡೆ ಅಪ್ಪೆಕಟ್ಟು, ನಿರ್ಮಲಾ ರಾಘವ ಭಟ್ಟ ಅಗಸಾಲ ಬೊಮ್ಮನಳ್ಳಿ, ಜಯಲಕ್ಷ್ಮೀ ರಾಜಾರಾಮ ಹೆಗಡೆ ಹಾರ್ಸಿಕಟ್ಟಾ, ವಸುಮತಿ ಬಾಲಚಂದ್ರ ಭಟ್ಟ ಕ್ಯಾದಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಿಂದುಳಿದ ‘ಅ’ ವರ್ಗದಿಂದ ದೇವೇಂದ್ರ ಈರಪ್ಪ ನಾಯ್ಕ ಕುಪ್ಪಳಿ ನಾಮಪತ್ರ ಸಲ್ಲಿಸಿದ್ದಾರೆ.

ಹಾಗೆಯೇ ಆ. 7 ಮತ್ತು 8 ರಂದು ಸಾಮಾನ್ಯ ವರ್ಗದಿಂದ ವಿಶ್ವನಾಥ ಸುಬ್ರಾಯ ಭಟ್ಟ ನಾಡಗುಳಿ, ವೆಂಕಟ್ರಮಣ ನಾರಾಯಣ ಹೆಗಡೆ ತೈಲಗಾರ ನಾಮಪತ್ರ ಸಲ್ಲಿಸಿದ್ದು, ಸಹಕಾರಿ ಸಂಘದಿಂದ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಮುಂಡಗನಮನೆಯಿಂದ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ, ಸಾಲ್ಕಣಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಸಾಲ್ಕಣಿಯಿಂದ ಪುರುಷೋತ್ತಮ ನರಸಿಂಹ ಹೆಗಡೆ, ವ್ಯವಸಾಯ ಸೇವಾ ಸಹಕಾರಿ ಸಂಘ ಹೀಪನಳ್ಳಿಯಿಂದ ವೆಂಕಟ್ರಮಣ ರಾಮಕೃಷ್ಣ ಹೆಗಡೆ, ಹುಳಗೋಳ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಹಕಾರಿ ಸಂಘ ನಿ., ತಾರಗೋಡದಿಂದ ದತ್ತಗುರು ಸೀತಾರಾಮ ಹೆಗಡೆ, ಸೋಂದಾ ಸೇವಾ ಸಹಕಾರಿ ಸಂಘ ನಿ. ಸೋಂದಾದಿಂದ ಗಣಪತಿ ವೆಂಕಟ್ರಮಣ ಜೋಶಿ ನಾಮಪತ್ರ ಸಲ್ಲಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top